ಕೆಸರು ತುಂಬಿದ ಗದ್ದೆಗಳ
ಸುತ್ತಲೂ ಜನರ
ಹರ್ಷೋದ್ಗಾರ, ಕೇಕೆ, ಗದ್ದಲ, ಆರ್ಭಟ ಮುಗಿಲು
ಮುಟ್ಟುತ್ತಿದೆ. ಓಡುವವರು, ಬಿದ್ದವರು, ಕೆಸರಲ್ಲಿ ಹೊರಳಾಡುವವರು,
ಸುಮ್ಮನೇ ಮಳೆಯಲ್ಲಿ
ನೆನೆಯುವವರು ಹೀಗೆ ಭಿನ್ನ ರೀತಿಯ ಜನಗಳು
ಕೆಸರು ಗದ್ದೆಯಲ್ಲಿ
ಕಾಣಿಸಿಕೊಂಡಿದ್ದಾರೆಂದರೆ ಅದಕ್ಕೆ ಕಾರಣ
ಅಂದು ಅಲ್ಲಿ
ಕೆಸರು ಗದ್ದೆ
ಕ್ರೀಡಾಕೂಟ. ಕರಾವಳಿಯ ಉಭಯ ಜಿಲ್ಲೆಗಳಲ್ಲಿ ಇತ್ತೀಚಿನ
ಕೆಲವು ವರ್ಷಗಳಿಂದ
ಭಾರೀ ಜನಪ್ರಿಯತೆ
ಕಂಡಿರುವ ಈ
ಕೆಸರುಗದ್ದೆ ಓಟ ಒಂದು ವಿಭಿನ್ನ ಕಾರಣದಿಂದಾಗಿ
ಉಡುಪಿ ಜಿಲ್ಲೆಯ
ಮಣಿಪುರದಲ್ಲಿ ಗಮನ ಸೆಳೆತು. ಅದೇ ಜರ್ಮನ್
ದೇಶದ ಪ್ರಜೆಯೊಬ್ಬ
ತುಳುನಾಡ ಮಣ್ಣಿನಲ್ಲಿ
ಕೆಸರು ಮೆತ್ತಿಕೊಂಡು
ಗೆದ್ದುಬಂದ ಕತೆ.
ಆತನ ಹೆಸರು
ಲಿಯೋನ್ ಜೊನಾಥನ್
ಕ್ರೆಬ್ಸ್. ಜರ್ಮನಿಯ
ಪ್ರಾಂಕ್ಫರ್ಟ್ ಪ್ರದೇಶದ
ಈ ೨೦ರ
ತರುಣ ಒಂದು
ವರ್ಷದ ತರಬೇತಿಗೆ
ಉಡುಪಿಯ 'ಆಶಾನಿಲಯ' ವಿಶೇಷ ಮಕ್ಕಳ
ಶಾಲೆಗೆ ಬಂದಿದ್ದಾರೆ.
ತರಬೇತಿ ಅನ್ನುವುದಕ್ಕಿಂತಲೂ
ಹೆಚ್ಚಾಗಿ ಅದು
ಪಾಶ್ಚಾತ್ಯ ದೇಶದಲ್ಲಿ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ
ಜೀವನದ ನಡುವೆ
ತೆಗೆದುಕೊಳ್ಳುವ ಬ್ರೇಕ್ 'ಸೋಶಿಯಲ್ ಇಯರ್' ಎನ್ನಬಹುದು.
ಜರ್ಮನಿಯಲ್ಲಿ ಧರ್ಮಗುರುವೊಬ್ಬರ ಪುತ್ರನಾಗಿ ಮೂವರು ಸಹೋದರಿಯರು,
ಪ್ರೀತಿಯ ತಾಯನ್ನು
ಬಿಟ್ಟು ಕಳೆದ
ವರ್ಷ ಸಪ್ಟೆಂಬರ್ನಲ್ಲಿ
ಭಾರತಕ್ಕೆ ಬಂದು
ಒಂದು ವರ್ಷ
ಕಳೆದ ಲಿಯೋನ್
ಆಗಸ್ಟ್ ೧೨ರಂದು
ಮತ್ತೆ ತವರಿಗೆ
ಮರಳಲಿದ್ದಾರೆ. ಬ್ಯುಸಿನೆಸ್ ಅಧ್ಯಯನ ತನ್ನ ಗುರಿಯಾಗಿದ್ದರೂ
ಆ ಗುರಿಯನ್ನು
ಇನ್ನಷ್ಟು ನಿಖರವಾಗಿಸಲು,
ಮಾನಸಿಕವಾಗಿ ತನ್ನನ್ನು ಇನ್ನಷ್ಟು ಬಲಪಡಿಸಿಕೊಳ್ಳಲು ರಜೆಯ
ಮೇಲೆ ಬಂದಿದ್ದ
ಈ ಯುವಕನಿಗೆ
ಉಡುಪಿಯ ಗೆಳೆಯರು
ಕೆಸರುಗದ್ದೆ
ಕ್ರೀಡಾಕೂಟದಲ್ಲಿ ಭಾಗವಹಿಸುವ ಆಹ್ವಾನವಿತ್ತಾಗ
ಕಣ್ಮುಚ್ಚಿ ಒಪ್ಪಿಕೊಂಡಿದ್ದರಂತೆ.
ಉಡುಪಿ ವಲಯದ
ಸಿಎಸ್ಐ ಕ್ರೈಸ್ತ
ಬಾಂಧವರಿಗೆ ಮಾತ್ರ ಮೀಸಲಾಗಿದ್ದ ಸ್ಪರ್ಧೆ ಇದಾಗಿದ್ದರೂ ಲಿಯೋನ್ ಉತ್ಸಾಹವನ್ನು
ಕಂಡ ಸಂಘಟಕರೂ
ಅನುಮತಿಯನ್ನು ನೀಡಿ ಈತನನ್ನು ಕೆಸರುಗದ್ದೆಗಿಳಿಸಿದರು. ನಿರೀಕ್ಷೆಗೂ ಮೀರಿದ ಅದ್ಭುತ ಪ್ರದರ್ಶನ
ನೀಡಿ ಬಹುಮಾನಗಳನ್ನು
ಗೆದ್ದು ಆ
ದಿನದ ಪ್ರಮುಖ
ಆಕರ್ಷಣೆಯಾಗಿ ಮಿಂಚಿದ್ದು ಲಿಯೋನ್
ಪಾಲಿನ ಹೆಗ್ಗಳಿಕೆ.
ಸಾಮಾನ್ಯವಾಗಿ ಎಲ್ಲ ಕೆಸರುಗದ್ದೆ
ಕ್ರೀಡಾಕೂಟಗಳಲ್ಲಿರುವಂತೆ ಖುಕೊಡುವ ಸ್ಪರ್ಧೆಗಳು
ಇಲ್ಲಿದ್ದವು. ಮೂರು ಕಾಲಿನ ಓಟ, ಹಿಂದಕ್ಕೆ
ಓಡುವುದು, ಅಡಿಕೆ
ಹಾಳೆ ಓಟ,
ಹೊತ್ತುಕೊಂಡು ಓಡುವುದು, ರಿಲೇ ಓಟ, ಬೆರ್ಚೆಂಡು,
ಹಗ್ಗಜಗ್ಗಾಟಗಳು ಜಿದ್ದಾಜಿದ್ದಿಂದ ನಡೆದವು. ಲಿಯೋನ್ ಗದ್ದೆಗಿಳಿಯುತ್ತಾರೆಂದು
ನಿರೂಪಕರು ಘೋಸಿದ
ಕೂಡಲೇ ಜೋರಾದ
ಚಪ್ಪಾಳೆಗಳ ಸ್ವಾಗತ
ಈ ಬಿಳಿಯ
ಸ್ಪರ್ಧಿಗೆ ದೊರಕಿತು.
ಮೂರು ಕಾಲಿನ
ಓಟದಲ್ಲಿ ಹೆಚ್ಚೇನೂ
ಸಾಧಿಸಲಾರದೆ ಹೋದರೂ ಈತನ ನಿಜವಾದ ಸಾಮರ್ಥ್ಯ
ಓಟದಲ್ಲಿ ಗೊತ್ತಾತು. ಹಿಂದಕ್ಕೆ ಓಡುವ ಓಟದಲ್ಲಿ ಪ್ರಥಮ ಸ್ಥಾನ
ಪಡೆದ ಲಿಯೋನ್
ರಿಲೇ ಸ್ಪರ್ಧೆಯಲ್ಲಿ
ತನ್ನ ತಂಡಕ್ಕೆ
ಅಮೋಘ ಮುನ್ನಡೆ
ನೀಡಿ ಗೆಲುವು
ತಂದಿತ್ತ ಪರಿಗೆ
ಎಲ್ಲರೂ ದಂಗಾಗಿದ್ದರು!
ಉಳಿದವರಿನ್ನೂ ಅರ್ಧದಾರಿಯಲ್ಲಿರುವಾಗಲೇ ಬರೀ ನೆಲದ ಮೇಲೆ
ಓಡಿದಂತೆ ಕೆಸರು
ಗದ್ದೆಯಲ್ಲಿ ಓಡಿ ಗುರಿಸಾಧಿಸಿ ಪ್ರಚಂಡ ಕರತಾಡನ
ಗಿಟ್ಟಿಸಿದ್ದ.
ಲಿಯೋನ್ ದೇಹಪ್ರಕೃತಿಗೆ
ಈ ಬಿಸಿಲು
ಈ ಸೆಕೆ
ಎಲ್ಲವೂ ಹೊಸತು.
ಕೆಸರುಗದ್ದೆಯಲ್ಲಿ ಹೊರಳಾಡಿದ ಮರುದಿನ ಲಿಯೋನ್ನ ಬಿಳಿಮೈಯ
ತುಂಬೆಲ್ಲಾ ಸನ್ಬರ್ನ್ನ
ಕೆಂಪುಗುಳ್ಳೆಗಳು ಎದ್ದಿದ್ದವು. ಆದರೂ ಲಿಯೋನ್ ಮುಖದಲ್ಲಿ
ಏನನ್ನೋ ಸಾಧಿಸಿದ
ಖು, ಉಲ್ಲಾಸವಿತ್ತು. ತನ್ನ
ಭಾರತದ ಈ
ಸುಧೀರ್ಘ ತರಬೇತಿಯಲ್ಲಿ
ಕೆಸರುಗದ್ದೆಯ ಈ ಮೋಜಿನಾಟ ಅವರ ಜೀವಮಾನದುದ್ದಕ್ಕೂ
ಸ್ಮರಣೀಯವಾಗಿರುವುದರಲ್ಲಿ ಸಂಶಯವಿ.
ಲಿಯೋನ್ ಮುಂದಿನ
ಭವಿಷ್ಯಕ್ಕೊಂದು
ಶುಭಹಾರೈಸಿ ಒಳಿತಾಗಲೆಂದು
ಆಶಿಸೋಣ.
-ಸುಚಿತ್ ಕೋಟ್ಯಾನ್ ಕುರ್ಕಾಲು